ದಿನಕ್ಕೊಂದು ಶಿಶುಗೀತೆ
ಆಡಿಯೋ ಲಿಂಕ್
https://drive.google.com/file/d/1Wv3ZoO_AM8MZDa2pdBZ_b71OmtuCcHV6/view?usp=drivesdk
52. ಶ್ರವಣಕುಮಾರ
ಹೇಳುವೆ ಕಥೆ ಹೇಳುವೆ
ಕೇಳಿರಿ ಕಥೆ ಹೇಳುವೆ|
ತಂದೆ ,ತಾಯೆ ದೇವರೆಂದ
ಕುವರನ ಕಥೆಯ ಹೇಳುವೆ॥
ಶಂತನು,ಜ್ಞಾನವಂತಿಯರ
ಪ್ರೀತಿಯ ಪುತ್ರನಿವನು।
ಕಣ್ಣು ಕಾಣದ ಅಪ್ಪ,ಅಮ್ಮನ
ಸೇವೆಯೇ ಪೂಜೆ ಎಂದವನು ॥
ಪೋಷಕರ ತೀರ್ಥಯಾತ್ರೆಯ
ಇಂಗಿತವನು ಕೇಳಿದ ಮಗನು॥
ಈರ್ವರನ್ನು ಕರೆದೊಯ್ಯುಲು
ಯೋಜನೆಯನು ರೂಪಿಸಿದನು॥
ಬಿದಿರಿನ ಕಂಬದ ತುದಿಗಳಿಗೆ
ಬುಟ್ಟಿಗಳನು ಕಟ್ಟಿ।
ಬುಟ್ಟಿಯಲವರನು ಕೂರಿಸಿ
ಹೊರಟೆಬಿಟ್ಟನು ಜಟ್ಟಿ॥
ಕಾವಡಿಯನ್ನು ಹೊತ್ತು ಶ್ರವಣನು
ಕಾಲ್ನಡಿಗೆಯಲಿ ಸಾಗಿದನು|
ದೇವರ ಪುಣ್ಯ ಕ್ಷೇತ್ರಗಳ
ದರುಶನವನ್ನು ಮಾಡಿಸಿದನು ॥
ಕಾಡಿನಲ್ಲಿ ನಿಲ್ಲದ ಪಯಣ
ಸೇವೆಯ ಯಜ್ಞ ಸಾಗಿರಲು।
ತಂದೆ ತಾಯಿಯು ಬಾಯಾರಿ
ನೀರಡಿಕೆ ಎಂದಿರಲು॥
ನೀರು ತರಹೋದ ಕುವರ
ದಶರಥನ ಬಾಣಕೆ ಬಲಿಯಾದರು।
ಇದನು ಕೇಳಿದ ತಂದೆತಾಯಿಯು
ನೀರಡಿಕೆಯಲೆ ಪ್ರಾಣ ಬಿಟ್ಟರು ॥
ಜನುಮದಾತರ ಸೇವೆಯಗೈಯ್ದು
ನಾಡಿಗೆ ಮಾದರಿ ಈ ತರುಣ।
ತಂದೆ ತಾಯಿಯ ಪೂಜಿಸೆ ಸುಖವು
ಎಂದು ಸಾರಿಹ ಈ ಶ್ರವಣ॥
ರಚನೆ ಮತ್ತು ಗಾಯನ
ವೇದಾ ಅಶೋಕ್ ಚಿಕ್ಕಮಗಳೂರು🖊️
ಸಂಗ್ರಹ
ರೇಣುಕಾರಾಧ್ಯ
GLPS M KOPPALU ARSIKERE
No comments:
Post a Comment