Monday, 22 August 2022

ವಿದ್ಯಾಪ್ರವೇಶ ದಿನ - 62

 *ವಿದ್ಯಾಪ್ರವೇಶ ದಿನ-62* 

✒️🚁🎮🎨🎲🧮📏🔍

*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)    

೬೧ ನೇ ದಿನದ ಚಟುವಟಿಕೆಗಳನ್ನು ಮಾಡಿಸುವುದು

 

     *ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)    

ದಿನ ೬೧ ರ ಚಟುವಟಿಕೆಯನ್ನು ಮುಂದುವರೆಸಿ.

---–------------------------------ 

ಅವಧಿ-2 (40ನಿ)

*ನನ್ನ ಸಮಯ* 

* ಮಗು ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಹಾಗೂ ಸೂಕ್ತವಾಗಿ 

ಪೂರ್ಣಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವುದು.

* ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಮಗು ಪೂರ್ಣಗೊಳಿಸಲು ಸಹಕರಿಸುವುದು.

* ಮುಂದಿನ ದಿನಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಯಾವ ಮಕ್ಕಳ ಕಡೆಗೆ ಹೆಚ್ಚು ಗಮನಹರಿಸಬೇಕೆಂಬ 

ಬಗ್ಗೆ ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗುವುದು.

* ದಿನದ ಅಂತ್ಯಕ್ಕೆ ಕಲಿಕಾ ಮೂಲೆಗಳಲ್ಲಿ ಮುಂದಿನ ಹಂತಕ್ಕೆ ಹೊಂದಿಸಬೇಕಾದ ಸಾಮಗ್ರಿಗಳನ್ನು 

ಸಿದ್ಧಪಡಿಸಿಕೊಳ್ಳುವುದು.

----------------------------–----–-

     ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)    

ಸಾಮರ್ಥ್ಯ: ಪರಿಸರದ ಅರಿವು, ಆವಿಷ್ಕರಿಸುವುದು, ಪ್ರಯೋಗ ಶೀಲತೆ ಬೆಳೆಸುವುದು

ಚಟುವಟಿಕೆ : ಸಸ್ಯದ ಅವಶ್ಯಕತೆಗಳ ಬಗ್ಗೆ ತಿಳಿಯೋಣ (ಗುರಿ-೩)

ಉದ್ದೇಶ:- ಸಸ್ಯದ ಬೆಳವಣಿಗೆ ಮತ್ತು ಉಪಯೋಗ ತಿಳಿಯುತ್ತಾರೆ.

ಅಗತ್ಯ ಸಾಮಗ್ರಿಗಳು : ಕಾಗದದ ಲೋಟ/ತೆಂಗಿನ ಕಾಯಿ ಚಿಪ್ಪು, ಮಣ್ಣು, ಬೀಜಗಳು

ವಿಧಾನ : ಸಸ್ಯವನ್ನು ಪರಿಚಯಿಸುವುದು,

- ಸಸ್ಯ ಬೆಳೆಯಲು ಅವಶ್ಯಕ ಅಂಶಗಳಾದ ಮಣ್ಣು, ನೀರು, ಗಾಳಿ, ಬೀಜ ಮತ್ತು ಅವಕಾಶಗಳ ಬಗ್ಗೆ ತಿಳಿಸುವುದು.

- ಕಾಗದದ ಲೋಟದಲ್ಲಿ ಮಣ್ಣು ಹಾಕಿ ವಿವಿಧ ರೀತಿಯ ಬೀಜಗಳನ್ನು ನೆಟ್ಟು, ಪ್ರತಿದಿನ ನೀರುಣಿಸಿ, ಆಗುವ 

ಬದಲಾವಣೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ತಿಳಿಸುವುದು.

- ಹಾಡು ಹೇಳಿಕೊಡುವುದು.

ಮರ

ಮಣ್ಣಿನಿಂದ ಹುಟ್ಟುವೆ

ಮಣ್ಣು ಹಿಡಿದು ನಿಲ್ಲುವೆ

ಹಣ್ಣುಗಳನು ನೀಡುವೆ

ಇನ್ನು ಇನ್ನು ಬೆಳೆಯುವೆ

ಬಿಸಿಲಿನಲ್ಲಿ ನಿಲ್ಲುವೆ

ನಮಗೆ ನೆರಳು ನೀಡುವೆ

ಶುದ್ಧ ಗಾಳಿ ನೀಡುತಾ

ಎಲ್ಲರನ್ನು ಸಲಹುವೆ

೨ನೇ ತರಗತಿ : ಸಸ್ಯಗಳು ಬೆಳೆಯಲು ಬೇಕಾಗುವ ಅವಶ್ಯಕ ವಸ್ತುಗಳನ್ನು ಹೇಳಿಸುವುದು. ನಿಮ್ಮ ಮನೆಯಲ್ಲಿ 

ಇರುವ/ತಿಳಿದಿರುವ ಧಾನ್ಯಗಳ ಹೆಸರು ಹೇಳು ಎಂದು ಕೇಳುವುದು.

೩ನೇ ತರಗತಿ : ರಾಗಿ, ಜೋಳ, ಭತ್ತ, ಹೆಸರು ಇತ್ಯಾದಿ ಧಾನ್ಯಗಳನ್ನು ಚಿಪ್ಪು ಅಥವಾ ಲೋಟದಲ್ಲಿ ಮಣ್ಣು 

ತುಂಬಿಸಿ ಬೀಜಗಳನ್ನು ನೆಡಿಸಿ ನೀರು ಹಾಕಿ ಬೆಳೆಸಲು ಹೇಳುವುದು. ಧಾನ್ಯಗಳನ್ನು ಬೆಳೆದ ಕ್ರಮದ ಬಗ್ಗೆ ಮಕ್ಕಳಿಂದ ಹೇಳಿಸುವುದು.

----------------------–---------

ಅವಧಿ -4     (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)    

 ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.

ಆಕಾರಗಳ ಪರಿಕಲ್ಪನೆ.

ಚಟುವಟಿಕೆ: ಟ್ರೇಸಿಂಗ್, (ಮರಳು). ಗುರಿ - ೧

ಉದ್ದೇಶಗಳು: •     ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.

•     ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.

ಸಾಮಗ್ರಿಗಳು : ಮರಳು.ಲೋಟ, ತೆಂಗಿನ ಚಿಪ್ಪು, ಚಮಚ.ರಟ್ಟುಗಳು.

ವಿಧಾನ : ಮಕ್ಕಳಿಗೆ ಮೇಲ್ಕಂಡ ವಸ್ತುಗಳನ್ನು ನೀಡಿ ಮನೆ, ಗೂಡು, ಬೆಟ್ಟ , ಕಾಲುವೆ, ಕಟ್ಟೆ ಕಟ್ಟುವುದು ಇತ್ಯಾದಿ 

ಮಾದರಿಯಲ್ಲಿ ಮರಳನ್ನು ಹಾಕಲು ಹೇಳಿ ಅದರ ಬಗ್ಗೆ ವಿವರಿಸಲು ಹೇಳುವುದು.

ವಿವರ: ೨ ಮತ್ತು ೩ ನೇ ತರಗತಿಗೆ ಮಕ್ಕಳಿಗೆ ಮೇಲಿನ ಚಟುವಟಿಕೆಯನ್ನೇ ಮಾಡಿಸುವುದು.

    -------------------------------

ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 *ಆಲಿಸುವುದು ಮತ್ತುಮಾತನಾಡುವುದು* 

 ಸಾಮರ್ಥ್ಯ : ಧ್ವನಿ ಮತ್ತು ಸಂಕೇತಗಳ ಸಂಯೋಜನೆ, ಪದ ಸಂಪತ್ತಿ ಅಭಿವೃದ್ಧಿ, ಅಕ್ಷರ ಗುರುತಿಸುವುದು.

ಚಟುವಟಿಕೆ : ಪದದ ಕೊನೆಯ ಧ್ವನಿಯನ್ನು ಗುರುತಿಸುವರು ಮತ್ತು ಹೊಂದಿಸುವರು (ಗುರಿ : ೨) ಇಅಐ-೨೨

ಉದ್ದೇಶಗಳು : * ಧ್ವನಿ ಸಂಕೇತಗಳ ಅರಿವು ಮೂಡಿಸುವುದು.

* ಪದಗಳನ್ನು ಗ್ರಹಿಸಿ ಗುರುತಿಸುವುದು.

* ಪದಗಳಲ್ಲಿಯ ಅಕ್ಷರಗಳ ಅಕ್ಷರ–ಧ್ವನಿ ಸಹಸಂಬ0ಧ ಗುರುತಿಸುವುದು.

* ಗಮನವಿಟ್ಟು ಆಲಿಸಿ ಅಕ್ಷರ-ಧ್ವನಿ ಸಹಸಂಬ0ಧ ಅರ್ಥೈಸಿಕೊಳ್ಳುವುದು.

ಅಗತ್ಯ ಸಾಮಗ್ರಿ: ಕರಿ ಹಲಗೆ

ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, ಕೆಲವು ಪರಿಚಿತ ಪದಗಳನ್ನು ಹೇಳಲು ತಿಳಿಸುವುದು.

ಉದಾ : ಸರ, ಮರ, ಅರ, ದರ, ಬರ,

- (ಒಂದೇ ರೀತಿಯ) ಕೊನೆಯ ಅಕ್ಷರದ ಧ್ವನಿ ಗುರುತಿಸುವುದು ತಿಳಿಸುವುದು.

- ಹೊಸ ಪದವೊಂದನ್ನು ಹೇಳಿ, ಅದೇ ಶಬ್ಧದಿಂದ ಕೊನೆಯಾಗುವ ಪದಗಳನ್ನು ಹೇಳಿಸುವುದು.

- ವಿವಿಧ ಪದಗಳನ್ನು ಪ್ರದರ್ಶಿಸುತ್ತಾ, ಒಂದೇ ರೀತಿಯ ಧ್ವನಿಯಿಂದ ಕೊನೆಯಾಗುವ ಪದಗಳನ್ನು 

ಪರಿಚಯಿಸುವುದು.

ತರಗತಿವಾರು ವಿವರ : ೨ ನೇ ತರಗತಿಯ ಮಕ್ಕಳು ಸೂಚಿಸಿದ ಧ್ವನಿ ಅಂತ್ಯದಲ್ಲಿ ಬರುವಂತೆ ವಿವಿಧ ಪದಗಳನ್ನು 

ಪಟ್ಟಿ ಮಾಡುವುದು. ೩ನೇ ತರಗತಿಯ ಮಕ್ಕಳು ವಿವಿಧ ಪದಗಳಲ್ಲಿ ಸೂಚಿತ ಅಂತ್ಯ ಅಕ್ಷರದ ಪದ ಗುರುತಿಸಿ, ಆ 

ಪದ ಬಳಸಿ ವಾಕ್ಯ ರಚಿಸುವುದು.

ಬಳಸಬೇಕಾದ ಅಭ್ಯಾಸದ ಹಾಳೆಗಳು: EC-೧೬ (ತರಗತಿ ೧, ೨, ೩)


*ಅರ್ಥಗ್ರಹಿಕೆಯೊಂದಿಗಿನ ಓದು*     

 ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅಕ್ಷರಗಳನ್ನು ಗುರುತಿಸುವುದು, ಸೂಕ್ಷö್ಮ ಸ್ನಾಯು ಕೌಶಲಗಳ 

ಅಭಿವೃದ್ಧಿ.

ಚಟುವಟಿಕೆ : ಅಕ್ಷರಗಳನ್ನು ಧ್ವನಿಗಳೊಂದಿಗೆ ಸಂಯೋಜಿಸುವುದು (ಗುರಿ-೨)

ಅಗತ್ಯ ಸಾಮಾಗ್ರಿಗಳು : ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ, ಅಕ್ಷರಗಳ ಆಕಾರ ಇತ್ಯಾದಿ

ವಿಧಾನ: ತರಗತಿಯಲ್ಲಿರುವ ವಸ್ತುಗಳ ಹಾಗೂ ಮಕ್ಕಳ ಹೆಸರುಗಳಲ್ಲಿರುವ ಅಕ್ಷರಗಳನ್ನು ಗುರುತಿಸಲು ತಿಳಿಸುವುದು.

* ಗುರುತಿಸಿದ ಅಕ್ಷರಗಳನ್ನು ಅದರ ಧ್ವನಿಯೊಂದಿಗೆ ಸಂಯೋಜಿಸುವುದು.

* ವಿವಿಧ ವಸ್ತುಗಳನ್ನು ಬಳಸಿ (ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ) ಅಕ್ಷರಗಳ ಆಕಾರಗಳ 

ಕಲ್ಪನೆಯನ್ನು ಮೂಡಿಸುವುದು.

* ಮರಳು ಮತ್ತು ಮಣ್ಣಿನ ಮೇಲೆ ಅಕ್ಷರಗಳನ್ನು ಅಭ್ಯಾಸ ಮಾಡಿಸುವುದು.

* ಅಕ್ಷರಗಳನ್ನು ಬರೆದು, ಅಕ್ಷರಗಳ ಒಳಗೆ ಬಣ್ಣ ತುಂಬಲು ಹೇಳುವುದು.

* ನೆಲದ ಮೇಲೆ ನೀರಿನಿಂದ ಅಕ್ಷರದ ಆಕಾರಗಳನ್ನು ರಚಿಸುವುದು.

* ಕಾಗದ ಮತ್ತು ಪೆನ್ಸಿಲ್‌ಗಳನ್ನು ಹೊರತುಪಡಿಸಿ ಅಕ್ಷರಗಳನ್ನು ರಚಿಸಲು ಅವಕಾಶ ಕಲ್ಪಿಸುವುದು.

* ಅಕ್ಷರಗಳ ಧ್ವನಿಗಳಿಗೆ ಒತ್ತು ನೀಡುವುದು. ಪರಿಚಿತ ಪದಗಳೊಂದಿಗೆ ಅವುಗಳನ್ನು ಸಂಬ0ಧೀಕರಿಸುವುದು.

         *ಉದ್ದೇಶಿತ ಬರಹ*      

ಸಾಮರ್ಥ್ಯ: ಸೂಕ್ಷö್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆ

ಚಟುವಟಿಕೆ: ಚಿತ್ರಿಸುವುದು ಮತ್ತು ಹೆಸರಿಸುವುದು. (ಗುರಿ-೨) 

ಉದ್ದೇಶಗಳು:

•     ಸೂಕ್ಷö್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಪಡಿಸುವುದು.

•     ಉದ್ದೇಶಿತ ಬರವಣಿಗೆಗೆ ಅಣಿಗೊಳಿಸುವುದು.

•     ಆಯ್ಕೆಯ ಚಿತ್ರ ಬಿಡಿಸುವುದು.

ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್, ಪೆನ್ಸಿಲ್

ವಿಧಾನ : ಮಕ್ಕಳು ತಮ್ಮ ಆಯ್ಕೆಯ ಪ್ರಾಣಿ/ ಪಕ್ಷಿಗಳಗಳ ಚಿತ್ರ ಬಿಡಿಸುವುದು. ಬರೆದ ಚಿತ್ರಕ್ಕೆ ಬಣ್ಣ ತುಂಬಿ 

ಹೆಸರಿಸಲು ತಿಳಿಸುವುದು.

ತರಗತಿವಾರು ವಿವರ: ೨ ಮತ್ತು ೩ನೇ ತರಗತಿಯ ಮಕ್ಕಳು ತಮ್ಮ ಆಯ್ಕೆಯ ಪ್ರಾಣಿ/ ಪಕ್ಷಿಗಳ ಚಿತ್ರವನ್ನು ರಚಿಸಿ, 

ಹೆಸರಿಸಲು ತಿಳಿಸುವುದು.

ಬರವಣಿಗೆಯ ಮಾದರಿ:

ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು 

ಅವಕಾಶ ಕಲ್ಪಿಸುವುದು.

ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

--------------------------------

 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ದೇಹದ ಬೇರೆ ಬೇರೆ ಭಾಗಗಳ ಸಮತೋಲನ ಸಾಧಿಸುವುದು.

ಸಾಮಗ್ರಿ: ಮೃದುವಾದ ಜಾಗ, ಚಾಪೆ, ಜಮಖಾನ.

ಚಟುವಟಿಕೆ - ಸ್ಥಿರ ಸಮತೋಲನ

ವಿಧಾನ : ಈ ಚಟುವಟಿಕೆಯನ್ನು ತರಗತಿ ಕೋಣೆಯೊಳಗೆ/ಸಭಾಂಗಣದಲ್ಲಿ ಮಾಡಿಸುವುದು.

• ಮಕ್ಕಳು ಚಾಪೆಯ ಮೇಲೆ ಬೆನ್ನ ಮೇಲೆ ಮಲಗಲು ಸೂಚಿಸುವುದು.

• ಎಡಕ್ಕೆ ಹೊರಳಿ ಮಲಗಲು ಸೂಚಿಸುವುದು. ಬಲಗಾಲು ಮತ್ತು ಬಲಗೈ ಎತ್ತಲು ಸೂಚಿಸುವುದು.

• ಬಲಕ್ಕೆ ಹೊರಳಿ ಮಲಗಲು ಸೂಚಿಸುವುದು. ಎಡಗಾಲು ಮತ್ತು ಬಲಗೈ ಎತ್ತಲು ಸೂಚಿಸುವುದು.

ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಇದೇ ಚಟುವಟಿಕೆಯನ್ನು ಮುಂದುವರಿಸುವುದು

    -------------------------------- 

ಅವಧಿ - 7(40ನಿ)

*ಕಥಾ ಸಮಯ* 

• ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.

     ಕಥಾ ಸಾಹಿತ್ಯ ನಿರೂಪಣೆ

• ಶಿಕ್ಷಕರು ಕಥೆಯನ್ನು ನಿರೂಪಿಸುವುದರಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳುವುದರ ಮೂಲಕ ಕಥೆಯನ್ನು ಪೂರ್ಣ ಗೊಳಿಸುವುದು

ಉದಾ : ಅವರು ಎಲ್ಲಿಗೆ ಹೋದರು? ನಂತರ ಏನಾಯಿತು? ಇತ್ಯಾದಿ

ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.

• ಕಬ್ಬಿನ ಗದ್ದೆ ಎಲ್ಲಿತ್ತು ?

• ಕಬ್ಬನ್ನು ತಿಂದ ನಂತರ ನರಿಯು ಏನೆಂದು ಹೇಳಿತು?

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)

-----------------------------------

     ಅವಧಿ -8(20ನಿ)

*ಮತ್ತೆ ಸಿಗೋಣ*     

•     ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

•     ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕ ರೊಂದಿಗೆ ಮತ್ತು ಕುಟುಂಬದ 

ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

•     ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, 

ಬೀಳ್ಕೊಡಿ.

http://diethassan.karnataka.gov.in

【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ

ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment