Wednesday, 2 April 2025

ಸಚೇತನ ಕ್ರೋಢೀಕರಣ

 ಸಚೇತನ ಕ್ರೋಢೀಕರಣ

 ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ

https://drive.google.com/file/d/1eNXTfvm5fiTr8VJ3zIp1L1zlBz6jaD4g/view?usp=drivesdk


ರಚನೆ 

ಚಂದ್ರಕಲಾ H G

ಸಹಶಿಕ್ಷಕರು 

ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಬೀಚನಹಳ್ಳಿ 

ಕುಣಿಗಲ್ ತಾಲ್ಲೂಕ್ ತುಮಕೂರು ಜಿಲ್ಲೆ

ಕೃಪೆ

ನಲಿಕಲಿ ಆ್ಯಪ್

Sunday, 30 March 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ*

*ಆಡಿಯೋ ಲಿಂಕ್*

https://drive.google.com/file/d/1ataWBdAKC5SfLtRS0Rfy1WuflvUsOYoK/view?usp=drivesdk

*53.ಮತ್ತೆ ಬಂತು ಯುಗಾದಿ*

ಚೈತ್ರದ ಚಿಗುರಿನಲಿ
ಮಾವು ಬೇವು ಹಸಿರನುಟ್ಟು
ಬೆಲ್ಲದ ಸಿಹಿಯನರಸಿ
ಮತ್ತೆ ಬಂತು ಯುಗಾದಿ||

ಹೊಂಗೆ ನೆರಳ ತಂಪಿನಲಿ
ಮಾವು ಚಿಗುರು ಕಂಪಿನಲಿ
ಕೋಗಿಲೆ ದನಿ ಇಂಪು ಸೂಸಿ
ಮತ್ತೆ ಬಂತು ಯುಗಾದಿ||

ತರುಲತೆಗಳು ಕೊನರುವಲ್ಲಿ
ಅರಳಿನಿಂತ ಕುಸುಮಗಳಲಿ
ದುಂಬಿಗಳ ಝೇಂಕಾರದಲ್ಲಿ
ಮತ್ತೆ ಬಂತು ಯುಗಾದಿ||

ಹಳೆಯ ನೆನಪು ಹೊಸತು ಕನಸು
ಕೂಡಿರಲು ಬಾಳು ಸೊಗಸು
ಬದುಕು ಬೇವು-ಬೆಲ್ಲದಂತೆ
ಮತ್ತೆ ಬಂತು ಯುಗಾದಿ||

ಹೊಸ ವರುಷಕೆ ಹರುಷ ತುಂಬಿ
ನೇಸರನ ರಂಗು ಚೆಲ್ಲಿ|
ವಸುಂಧರೆಯ ಚೆಲುವನರಸಿ
ಮತ್ತೆ ಬಂತು ಯುಗಾದಿ||

ಮೇಲು ಕೀಳು ಭಾವ ತೊಡೆದು
ಸಮರಸದ ಬಾಳ ಬೆಸೆದು
ನೋವಿನಲ್ಲು ನಲಿವನರಸಿ
ಮತ್ತೆ ಬಂತು ಯುಗಾದಿ||
●●●●●●●●●●●●●●●
ರಚನೆ ಮತ್ತು ಗಾಯನ
*ಎಂ.ಜಿ.ಪರಮೇಶ್ ಮಡಬಲು*
ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಬಿ.ಆರ್.ಸಿ.ಕೇಂದ್ರ,
ಹೊಳೆನರಸೀಪುರ.

_ಸಂಗ್ರಹ_
ರೇಣುಕಾರಾಧ್ಯ
GLPS M KOPPALU ARSIKERE

Wednesday, 26 March 2025

ದಿನಕ್ಕೊಂದು ಶಿಶುಗೀತೆ

ದಿನಕ್ಕೊಂದು ಶಿಶುಗೀತೆ 

ಆಡಿಯೋ ಲಿಂಕ್

https://drive.google.com/file/d/1Wv3ZoO_AM8MZDa2pdBZ_b71OmtuCcHV6/view?usp=drivesdk

52. ಶ್ರವಣಕುಮಾರ 

ಹೇಳುವೆ ಕಥೆ ಹೇಳುವೆ 

ಕೇಳಿರಿ ಕಥೆ ಹೇಳುವೆ|

ತಂದೆ ,ತಾಯೆ ದೇವರೆಂದ 

ಕುವರನ ಕಥೆಯ ಹೇಳುವೆ॥


ಶಂತನು,ಜ್ಞಾನವಂತಿಯರ 

ಪ್ರೀತಿಯ ಪುತ್ರನಿವನು।

ಕಣ್ಣು ಕಾಣದ ಅಪ್ಪ,ಅಮ್ಮನ

ಸೇವೆಯೇ ಪೂಜೆ ಎಂದವನು ॥


ಪೋಷಕರ ತೀರ್ಥಯಾತ್ರೆಯ

ಇಂಗಿತವನು ಕೇಳಿದ ಮಗನು॥

ಈರ್ವರನ್ನು ಕರೆದೊಯ್ಯುಲು 

ಯೋಜನೆಯನು ರೂಪಿಸಿದನು॥


ಬಿದಿರಿನ ಕಂಬದ ತುದಿಗಳಿಗೆ 

ಬುಟ್ಟಿಗಳನು ಕಟ್ಟಿ।

ಬುಟ್ಟಿಯಲವರನು ಕೂರಿಸಿ 

ಹೊರಟೆಬಿಟ್ಟನು ಜಟ್ಟಿ॥


ಕಾವಡಿಯನ್ನು ಹೊತ್ತು ಶ್ರವಣನು

ಕಾಲ್ನಡಿಗೆಯಲಿ ಸಾಗಿದನು|

ದೇವರ ಪುಣ್ಯ ಕ್ಷೇತ್ರಗಳ 

ದರುಶನವನ್ನು ಮಾಡಿಸಿದನು ॥


ಕಾಡಿನಲ್ಲಿ ನಿಲ್ಲದ ಪಯಣ 

ಸೇವೆಯ ಯಜ್ಞ ಸಾಗಿರಲು।

ತಂದೆ ತಾಯಿಯು ಬಾಯಾರಿ 

ನೀರಡಿಕೆ ಎಂದಿರಲು॥


ನೀರು ತರಹೋದ ಕುವರ 

ದಶರಥನ ಬಾಣಕೆ ಬಲಿಯಾದರು।

ಇದನು ಕೇಳಿದ ತಂದೆತಾಯಿಯು 

ನೀರಡಿಕೆಯಲೆ ಪ್ರಾಣ ಬಿಟ್ಟರು ॥


ಜನುಮದಾತರ ಸೇವೆಯಗೈಯ್ದು

ನಾಡಿಗೆ ಮಾದರಿ ಈ ತರುಣ।

ತಂದೆ ತಾಯಿಯ ಪೂಜಿಸೆ ಸುಖವು 

ಎಂದು ಸಾರಿಹ ಈ ಶ್ರವಣ॥

ರಚನೆ ಮತ್ತು ಗಾಯನ

ವೇದಾ ಅಶೋಕ್ ಚಿಕ್ಕಮಗಳೂರು🖊️

ಸಂಗ್ರಹ

ರೇಣುಕಾರಾಧ್ಯ

GLPS M KOPPALU ARSIKERE 

Monday, 24 March 2025

ನಲಿಕಲಿ ನಮೂನೆ

 ನಲಿಕಲಿ ವಯಕ್ತಿಕ ನಮೂನೆ ಲಿಂಕ್ ಕ್ಲಿಕ್ಕಿಸಿ

https://drive.google.com/file/d/1TIA4KZvYiDe6B9kJmQxFShE0RbP8eDJl/view?usp=drivesdk


ನಲಿ ಕಲಿ ಕ್ರೋಢೀಕೃತ ನಮೂನೆ ಲಿಂಕ್ ಕ್ಲಿಕ್ಕಿಸಿ

https://drive.google.com/file/d/1TN7rx1uRF6FNqkHJ34zUHdwRK3MeeX_-/view?usp=drivesdk

ದಿನಕ್ಕೊಂದು ಶಿಶುಗೀತೆ

*ದಿನಕ್ಕೊಂದು ಶಿಶುಗೀತೆ*

*51.ಅಮ್ಮ ಅಮ್ಮ ಉಂಡೆ ಕೊಡೆ*

ಅಮ್ಮ ಅಮ್ಮ ತಿನ್ನಲು
ನನಗೆ ಉಂಡೆ ಕೊಡಮ್ಮ,
ಉಂಡೆ ಜೊತೆ ನೆಂಚಿಕೊಳ್ಳೋಕೆ
ಚಕ್ಲಿ ಕೊಡಮ್ಮ.||ಪ ll

ಅಮ್ಮ ನನಗೆ ಹಸಿವೆ ಇಲ್ಲ
ಊಟ ಬ್ಯಾಡೆ,
ಅದಕ್ಕೆ ಬದಲು ಮೂರೆ ಮೂರು
ದೋಸೆ ಮಾಡೆ.
ಕ್ಲಾಸಿಗೆಲ್ಲ ನಾನೇ ಫಸ್ಟ್
ಎಲ್ಲಾ ಆಟದಲ್ಲಿ,
ಇನ್ನೂ ಸ್ವಲ್ಪ ಬೆಣ್ಣೆ ಹಾಕೆ
ದೋಸೆ ಪ್ಲೇಟಲ್ಲಿ.
ತುಂಬಾ ಸ್ವರಗೋಗಿದ್ದೀಯ ಅಂತ 
ಮೇಡಂ ಹೇಳಿದ್ರು,
ತಿಂಡಿ ಸರಿಯಾಗಿ ತಿನ್ನಲ್ವಾ ಅಂತ
  ಮೆತ್ತಗೆ ಕೇಳುದ್ರು.
ಮೇಡಂ ಮತ್ತೆ ಕೇಳದಾಗೆ
ತಿಂಡಿ ಮಾಡ್ಕೊಡೆ,
ಇಲ್ಲ ಅಂದರೆ ನಾಳೆ ಸ್ಕೂಲಿಗೆ
ನೀನೇ ಹೋಗ್ಬಿಡೆ.

*ಸಂಗ್ರಹ*
ರೇಣುಕಾರಾಧ್ಯ
GLPS M KOPPALU ARSIKERE

*ಹಾಡಿದವರು*
ಶ್ರೀಮತಿ ನಾಗಜ್ಯೋತಿ
ಸ.ಕಿ.ಪ್ರಾ.ಶಾಲೆ. ಭಕ್ತರಹಳ್ಳಿ
ಚನ್ನರಾಯಟ್ಟಣ
*ಆಡಿಯೋ ಲಿಂಕ್*

https://drive.google.com/file/d/1TCXREbygY8KmY23GcXdBOhXy2vOrGWKC/view?usp=drivesdk